ಕಂಡವ್ರ ಹೆಂಡತಿಗೆ ಸಂದೇಶ ಕಳಿಸಿದಾಗ.!
ಯಾಕೋ ಏನೋ ಸಣ್ಣ ಚಿತ್ರಣ ಮನಸ್ಸು , ಕಣ್ಣ ಮುಂದೆ ಬಂದಿತು. ಆ ಚಿತ್ರಣಕ್ಕೆ ಸಾಮಾಜಿಕ ಜಾಲತಾಣ ಕಾರಣವಾಗಿತ್ತು. ಅದಕ್ಕೆ ಫೇಸ್ ಬುಕ್ ಕಾರಣವಾಗಿತ್ತು. ಅದಕ್ಕೆ ಒಬ್ಬರು ಕಾರಣ ಆಗೋದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಎರಡು ಕೈ ಸೇರಿದರೆ ಚಪ್ಪಾಳೆ ಎಂಬುದು ಸಂಬಂದ ಪಟ್ಟವರು ಅರಿಯಲಾರರು.
ಅದೊಂದು ದಿನ ಮಳೆ ಬರುತ್ತಿತ್ತು. ಇದ್ದಕ್ಕಿಂದಂತೆಯೇ ಎಲ್ಲಿಂದಲೋ ಬಂದ ಇಬ್ಬರು ಯುವಕರು ಬಂದು ಒಬ್ಬನಿಗೆ ಮನಸ್ವೇಚ್ಚೆಯಂತೆ ಬೈಯ್ದುಕೊಂಡು, ಹೊಡೆಯುತ್ತಿದ್ದ ಅಲ್ಲಿ ನೆರೆದಿದ್ದವರು ಮೌನವಾಗಿದ್ದರು. ಕಾರಣ ಅಲ್ಲಿ ಒಬ್ಬ ಮಹಿಳೆಯ ವಿಚಾರವನ್ನು ಎಳೆ ತಂದು ಪ್ರಾರಂಬಿಸಿದ್ದೆ ಈ ಮೌನಕ್ಕೆ ಕಾರಣವಾಗಿತ್ತು.
ಗಲಾಟೆಯೂ ಆಯಿತು, ಮಳೆಯೂ ನಿಂತೂ ಆಯ್ತು ಮುಂದೆ ಗೊತ್ತೆ ಇದೆಯಲ್ಲ...ಪೋಲೀಸ್ ಠಾಣೆ, ವಿಚಾರಣೆ ದೂರು ದಾಖಲು, ನ್ಯಾಯಾಲಯ ಎಲ್ಲವೂ ಪ್ರಜ್ಞಾವಂತ ನಾಗರೀಕರಿಗೆ ಗೊತ್ತಿರುತ್ತದೆ. ಅವಿದ್ಯಾವಂತರಿಗೆ ಏನು ಇದರ ಬಗ್ಗೆ ತಿಳಿದಿರುವುದಿಲ್ಲ ಎಂದರೆ ತಪ್ಪಾಗಲಾರದು.
ನೀವು ಭಾವಿಸಿದಂತೆ ಠಾಣೆಗೆ ದೂರು ಹೋದ ಹಿನ್ನಲೆಯಲ್ಲಿ ಹೇಗೋ ವಿಚಾರಣೆ ಮಾಡಬೇಕಲ್ಲ. ಪ್ರಾರಂಭವಾಯಿತು ವಿಚಾರಣೆ. ದೂರುದಾರ ದೂರು ಕೊಡೋದು ಬಿಟ್ಟು ನನ್ನ ಹೆಂಡತಿಗೆ ನೋವಾಗುವಂತೆ ಸಂದೇಶ ಕಳಿಸಿದ್ದಾನೆ ಅದಕ್ಕೆ ಹೊಡೆದೆ ಎಂದನೋ ಹೊರತು ದೂರು ಕೊಡಲು ಮುಂದಾಗದೇ ಮೂರ್ನಾಲ್ಕು ಗಂಟೆ ಕಾಲ ತಡೆದು ದೂರು ಕೊಟ್ಟ. ಅಲ್ಲಿಗೆ ಅವನ ಕಥೆ ಮುಗಿಯಿತು.
ಹೆಂಡತಿಗೆ ಸಂದೇಶ ಕಳಸಿದವನ ವಿಚಾರಣೆ ಪ್ರಾರಂಭವಾದಾಗ ವಿಚಾರಣೆ ಮಾಡುವ ಪೋಲಿಸರನ್ನೆ ಪ್ರಶ್ನೆ ಕೇಳಲಾರಂಬಿಸಿದ.. ಯಾಕೆಂದ್ರೆ ತಪ್ಪು ಮಾಡಿರದ ಆ ಮುಖದ ಭಾವನೆ.ಎಲ್ಲವನ್ನೂ ಸಹಿಸಿಕೊಂಡು ಕಾನೂನು ಹೋರಾಟ ಮಾಡುವ ಮನಸ್ಸು , ದಿಟ್ಟ ಹೆಜ್ಜೆ ಎಲ್ಲದಕ್ಕೂ ಕಾರಣವಾಗಿತ್ತು. ಇದಕ್ಕೆ ವಿಚಾರಣೆ ಮಾಡುವ ಪೊಲೀಸರ ಮೌನವೂ ಒಂದಾಗಿತ್ತು.
ವಾಟ್ಸಾಫ್ ಗುಂಪು ನಿಮಗೆ ಗೊತ್ತೆ ಇದೆ.. ಅಲ್ಲಿ ಹಲವಾರು ಸದಸ್ಯರಿರುತ್ತಾರೆ. ಅದಕ್ಕೊಬ್ಬರು ಅಡ್ಮಿನ್ ಹೀಗೆ.. ಕೆಲವೆಡೆ ಎಲ್ಲರೂ ಅಡ್ಮಿನ್ ಹೀಗೆ ಗುಂಪುಗಳು ಇರುತ್ತದೆ. ಆದರೆ ಇಲ್ಲಿನ ವಾಟ್ಸಾಪ್ ಗುಂಪಿಗೆ ಪೋಲೀಸ್ ಇನ್ಸ್ಪೆಕ್ಟರ್ ಅವರೇ ಅಡ್ಮಿನ್ .. ಈಗ ಹೇಳಿ.. ತಪ್ಪು ಯಾರದ್ದು ಅಂತ.. ಗುಂಪಿಗೆ ಸಂದೇಶ ಕಳಿಸಿದ್ದವನದ,? ಗುಂಪಿಗೆ ಸೇರಿಸಿಕೊಂಡವರದ್ದಾ.? ಅಂತ.
ತಪ್ಪು ಯಾರ ಕಡೆಯಿಂದ ಆಗಿಲ್ಲ ಎಂಬುದು ಪೋಲೀಸ್ ಇನ್ಸ್ಪೆಕ್ಟರ್ ಗೆ ಗೊತ್ತಿತ್ತು. ತಪ್ಪು ಆಗಿದ್ದೆ ಆಗಿದ್ದರೆ ಹೊಡೆದಾಟ ನಡೆಸಿದವನ ಹೆಂಡತಿ ನಂಬರ್ ಹೇಗೆ ಅವರ ಗುಂಪಿಗೆ ಹಾಕಿದರು ಅಂದರೆ ಸೇರಿಸಿಕೊಂಡರೋ ಎಂಬ ಪ್ರಶ್ನೆ ವಿಚಾರಣೆ ಸಮಯದಲ್ಲಿ ಕೇಳುತ್ತಿದ್ದಾಗಲೇ ಅವನು ತಪ್ಪಿತಸ್ಥನಲ್ಲ ಎಂದು ನೇರವಾಗಿ ಗೊತ್ತಿದ್ದು..
ಗುಂಪಿನಲ್ಲಿ ಹೊಡೆದಾಡಿವನ ಹೆಂಡತಿ ಒಬ್ಬನಿಗಷ್ಟೇ ಇರಲಿಲ್ಲ, ವಾಟ್ಸಾಪ್ ಗುಂಪಿನ ಇತರ ಬಹುತೇಕ ಸದಸ್ಯರಿಗೂ ಇದ್ದರೂ ಅವರು ಮಾತ್ರ ಚಕಾರವೆತ್ತಲಿಲ್ಲ. ಕಾರಣ ಅದ್ಯಾವುದು ಅವರಿಗೆ ಸಂಬಂದಿಸಿರಲೇ ಇಲ್ಲ. ಉಳಿದವರಿಗೆ ಹೊಡೆದಾಟವೆ ಸಂತಸ ನೀಡಿತ್ತು. ಅಂತೂ ಕೊನೆಗೂ ಎದುರುದಾರ ದೂರು ಕೊಟ್ಟರೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಬದ್ದರಾಗಿದ್ದರು.
ದೂರು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಬದ್ದರಾಗಿದ್ದರೂ ವಾಟ್ಸಾಪ್ ಕಾಯ್ದೆಯಡಿ ಅವರೂ ಸಾಕ್ಷಿದಾರರನ್ನಾಗಿ ನ್ಯಾಯಾಲಯ ಪರಿಗಣಿಸುತ್ತಿತ್ತು, ಅಷ್ಟೇ ಅಲ್ಲ ಹೊಡೆದವನ ಹೆಂಡತಿಯೂ ನ್ಯಾಯಾಲಯಕ್ಕೆ ಬರಬೇಕಾಗಿತ್ತು. ಇದೆಲ್ಲವನ್ನ ಅರಿತಿದ್ದ ಹಿರಿಯರು ಗಲಾಟೆಗೆ ಪರೋಕ್ಷ ಹಿನ್ನಲೆ ತಿಳಿದು ತಟಸ್ಥರಾಗಿ ಇರುವಂತೆ ಸೂಚಿಸಿ ಸಲಹೆ ನೀಡಿದರು. ಅದರಂತೆ ಹೊಡೆಸಿಕೊಂಡವನು ಸುಮ್ಮನಾದರು.
ದಿನಗಳು ಉರುಳುತ್ತಾ ಹೋದಂತೆ ಗಲಾಟೆ ಪೂರಕ ಮಾಹಿತಿಯನ್ನ ಸ್ನೇಹಿತರರು ಸೇರಿದಂತೆ ಇತರರು ಕೇಳಲಾರಂಬಿಸಿದರು. ಅದಕ್ಕೆ ಅವನ ಉತ್ತರ ಒಂದೇ…. ಮೆಸೆಜ್ ಬಂದಿದೆ ಎಂದು ಹೊಡೆದವನು ಹಾಗೂ ಅವನ ಹೆಂಡತಿಯನ್ನೆ ಕೇಳಿಕೊಳ್ಳಿ ಎಂದು.. ಆಗಲೇ ಬಹುತೇಕರಿಗೆ ಹೇಳಲಾರಂಬಿಸಿದ.. ಯಾಕೆ ಈ ತರಹ ಹೇಳಿದ ಎಂಧರೆ ಮತ್ತೆ ಅವರೊಂದಿನ ಕಿಡಿಗೇಡಿ ಸನೇಹಿತರುಗಳೆ ಮತ್ತೆ ದ್ವೇಷ ಬೀಜ ಬಿತ್ತಿ ಗಲಾಟೆ ನೋಡುವ ಹಂಬಲ ಇರುವಂತಿತ್ತು.
ಪೊಲೀಸ್ ಅದಿಕಾರಿಯೋರ್ವ ಅಡ್ಮಿನ್ ಅಲ್ಲಿ ಮಾಡಡ ತಪ್ಪಿಗೆ ಗಲಾಟೆ, ಠಾಣೆಗೆ ಹೋದರೆ ಪ್ರಕರಣಗಳು ನೈಜವಾಗಿ ನಡೆಯುತ್ತಿರುವ ಘಟನೆಗಳು ನೆನೆದರೆ ಭಯವಾಗುತ್ತದೆ.

No comments:
Post a Comment